Slide
Slide
Slide
previous arrow
next arrow

ಶಂಭುಲಿಂಗೇಶ್ವರ ದೇವಾಲಯ ಶಿಲಾಮಯಗೊಳಿಸಲು ಸುನೀಲ ಶೆಟ್ಟಿ ಸಂಕಲ್ಪ

300x250 AD

ಹೊನ್ನಾವರ: ತಾಲೂಕಿನ ಗುಣವಂತೆಯ ಪುರಾಣ ಪ್ರಸಿದ್ಧವಾದ ಗುಣವಂತೆಯ ಶಂಭುಲಿಂಗೇಶ್ವರ ದೇವಾಲಯವನ್ನು ಶಿಲಾಮಯಗೊಳಿಸುವ ಸಂಕಲ್ಪ ಮಾಡಿರುವ ಉದ್ಯಮಿ ಸುನೀಲ ಆರ್.ಶೆಟ್ಟಿ ಸಾವಿರಾರು ಶಿವಭಕ್ತರ ಸಮ್ಮುಖದಲ್ಲಿ ವೇ.ಮೂ.ಜಯರಾಮ ಅಡಿ, ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್‌ರವರ ಆಚಾರ್ಯತ್ವದಲ್ಲಿ ಗಣಹೋಮ, ಶಿಲನ್ಯಾಸ ಹೋಮ, ಶಿಲಾ ಪೊಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿದರು.

ಆಡಳಿತ ಮಂಡಳಿಯ ಅಧ್ಯಕ್ಷ ನರಸಿಂಹ ಪಂಡಿತ, ಪ್ರಧಾನ ಕಾರ್ಯದರ್ಶಿ ಎಂ ಎಸ್ ಹೆಗಡೆ, ಎಂ ವಿ ಹೆಗಡೆ, ಧರ್ಮ ನಾಯ್ಕ, ಶಿವಾನಂದ ನಾಯ್ಕ, ಶಿವಾನಂದ ಗೌಡ, ಗೋವಿಂದ ಗೌಡ, ಶಂಕರ ಗೌಡ, ಸುರೇಶ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಸಾವಿರಾರು ಶಿವಭಕ್ತರು ಮಹಾ ಅನ್ನಪ್ರಸಾದವನ್ನು ಸ್ವೀಕರಿಸಿ ಪುನೀತರಾದರು. ರಾತ್ರಿ “ಭಜನಾ” ಕಾರ್ಯಕ್ರಮವು ನೆರವೇರಿತು.

300x250 AD
Share This
300x250 AD
300x250 AD
300x250 AD
Back to top